| |||||||
ಗಣೇಶ ಪ್ರಸಾದ ಪಾಂಡೇಲು ಗಝಲ್
ಹುಡುಕಿದರೂ ಸಿಗಲಿಲ್ಲ ನೈರ್ಮಲ್ಯ
ಎದೆಯಾಳದಲ್ಲಿ ಗೆಳೆಯಾ
ಬಯಸಿದರೂ ಅರಳಲಿಲ್ಲ ಕಮಲ
ಹೊಸಕೊಳದಲ್ಲಿ ಗೆಳೆಯಾ
ಚೆಲುವೊಳಗೆ ಇತ್ತೇನೋ ಭಾವಯಾನಕೆ
ನಿಗದಿಯಂತೆ ಹೊಸದಿಕ್ಕು
ಗೆಲುವ ಖುಷಿ ಕಾಣಲಿಲ್ಲ ಗುಂಪೊಳಗಣ
ಸಂಭ್ರಮದಲ್ಲಿ ಗೆಳೆಯಾ
ಚಿಂತೆ ಮರೆತು ಹೆಗಲು ನೀಡದಿರೆ ಒಂಟಿ
ಪಯಣವೇ ಚಿತೆಯ ಕಡೆಗೆ
ಸಂತೆಯಾದರೆ ಬಾಳು ಇರಲಾಗುವುದೇ
ಸಡಗರದಲ್ಲಿ ಗೆಳೆಯಾ
ನವನಿರ್ಮಾಣಕೆ ತೆರೆಯಲಾದೀತೇ
ಪಡಿಬಾಗಿಲು ಸ್ವಚ್ಛಮನದಲಿ
ನೋವ ನುಂಗದಿರಲು ಮಿಂಚು ಕಂಡೀತೇ ಕಾರ್ಮೋಡದಲ್ಲಿ ಗೆಳೆಯಾ
ಪಂಚಾಂಗದಲಿ ಮುಹೂರ್ತವ ಅರಿಯನೇ
ಪ್ರಸಾದನು ಕ್ಷಣಕೆ
ಪದಗಳು ಚದುರಿ ಹಾರಿದರೆ ಕವಿತೆಯಾಗಿ
ಮೂ(ಹಾ)ಡದಲ್ಲಿ ಗೆಳೆಯಾ
- ಗಣೇಶ ಪ್ರಸಾದ ಪಾಂಡೇಲು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ