ಮಂಗಳವಾರ, ಏಪ್ರಿಲ್ 12, 2022

ಸುಜಾತಾ ರವೀಶ್ ಗಝಲ್

    ಗಝಲ್


   ಭವಸಾಗರ ದಾಟಲು ಮಾರ್ಗ 
   ತೋರುತಿರುವೆಯಾ ದಾಶರಥಿ
   ನವಚೇತನ ತುಂಬಲು ದಾರಿ 
   ನೀನಾಗಿರುವೆಯಾ  ದಾಶರಥಿ

   ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವವಿರುವುದೇನು?
   ಜೀವಸಂಕುಲದ ಮೊರೆಗೆ ದೃಷ್ಟಿಗೆ 
   ಕಾಣುತಿರುವೆಯಾ  ದಾಶರಥಿ

   ಸರ್ವವ್ಯಾಪ್ತನು  ನೀನು ಅಣುರೇಣು 
   ತೃಣ ಕಾಷ್ಟದಲೂ ವ್ಯಕ್ತ 
   ಗರ್ವ ತ್ಯಜಿಸಿ ಭಕ್ತಿಯಿಂದ ಭಜಿಸೆ 
   ಒಲಿದಿರುವೆಯಾ ದಾಶರಥಿ

   ಮಮಕಾರವು ಬಂಧಿಸುತಲಿರೆ 
   ಮೋಕ್ಷವು ಕೈ ಹಿಡಿವುದೇ? 
   ಅಹಂಕಾರವ ತುಳಿದು ನಿನ್ನ ಸೇರೆ
   ಕಲಿಸಿರುವೆಯಾ   ದಾಶರಥಿ

   ಬಾಳಯಾನದೆ ಸರ್ವರು ಸಾಗಬೇಕು 
   ಸದಾ ಏಕಾಂಗಿಯಾಗಿಯೇ 
   ಮುಳುಗದಂತೆ ಅಭಯ ಆಶ್ರಯ 
   ನೀಡುತಿರುವೆಯಾ ದಾಶರಥಿ

   ಸಂಕೀರ್ತನೆ ಹಾಡುತ ದಾಸವರೇಣ್ಯರು 
   ನಿನ್ನ ಪೊಗಳಿದರು 
   ಸಂದರ್ಶನ ಕೊಡುತಾ ಭಕ್ತರ 
   ಕಾಯುತಿರುವೆಯಾ ದಾಶರಥಿ

   ಸಂಧಿಕಾಲದ ಈ ಸಮಯದಿ 
   ಬೇಡುತಿರುವೆನು ಆಶೀರ್ವಾದ 
   ಅಂಧಕಾರವ ನೀಗುತ ಸುಜಿಯ 
   ಪೊರೆದಿರುವೆಯಾ ದಾಶರಥಿ

                 - ಸುಜಾತಾ ರವೀಶ್

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...