ಗುರುವಾರ, ಮಾರ್ಚ್ 17, 2022

ನುಡಿನಮನ

    ನುಡಿನಮನ


   ತಿಮ್ಮನಾ ನುಡಿಗಳಲಿ ಕಗ್ಗವನು ಹೊಸೆಯುತಲಿ 
   ಬೊಮ್ಮನಾ ಸೃಷ್ಟಿಯನು ಬಣ್ಣಿಸಿದರು  ಒಮ್ಮನದಲಾಲಿಸೈ ಸಾಕ್ಷಾತ್ ಗೀತೆಯಿದುವೆ 
   ಹೊಮ್ಮಿರುವ ರತುನವಿದು ನರಹರಿಸುತೆ

   ವನಸುಮದ ವಿನಯವನು ಬಾಳಿನಲಿ ತರುತರುತ 
   ಘನಮಹಿಮೆ ತೋರಿದ ಮಹನೀಯರು
   ಮನ ಮುಟ್ಟಿಸುತ ತತ್ತ್ವ ಕೊಡುತಲಿ ಬಾಳಿಗರ್ಥ 
   ದಿನಮಣಿಯೆ ಕನ್ನಡಕೆ ನರಹರಿ ಸುತೆ

   ಅರಳುಮಲ್ಲಿಗೆಯಂಥ ಘಮದ ಪರಿಮಳ ಸೂಸಿ 
   ಸರಳ ನುಡಿಗಳಲಿ ಗಹನತೆಯ ತಿಳಿಸಿ
   ಮರಳು ಮುನಿಯನ ಮಾತುಗಳ ರಚಿಸುತಲಿ 
   ಚಿರಕಾಲ ನಿಂತವರು _ನರಹರಿಸುತೆ 

   ಸುಜಾತಾ ರವೀಶ್

ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...