ಮಕ್ಕಳ ಕವನ
ಪ್ರಾರ್ಥನೆ
ಪ್ರಕೃತಿಯ ಗುಟ್ಟನು ತಿಳಿಯಲೆ ಬೇಕಿದೆ
ಬೇಕೆಂದಾಗ ಬಳಸಿ
ವರವನು ನೀಡಿರಿ ಮುಕ್ಕೋಟಿ ದೇವರೆ
ಬಯಸಿದ್ದೆಲ್ಲಾ ಹರಸಿ ೧
ಸುಡುಸುಡು ಸೂರ್ಯಗೆ ಬೆವರನು ತೊಳೆಯಲು
ಮೋಡವ ಸುರಿಸಿ ಜಳಕ
ಗಡಗಡ ನಡುಗುವ ಮಾಗಿಯ ಚಳಿಯಲಿ
ಸೂರ್ಯನ ಶಾಖ ಪುಳಕ ೨
ವಾರಕ್ಕೊಮ್ಮೆ ಮಳೆಯನು ಸುರಿಸಿ
ಬೇಸಿಗೆಯಲ್ಲೂ ಹಸಿರು
ವರ್ಷದಪೂರ್ತಿ ಮಾವಿನ ಚಿಗುರಿಗೆ
ಕೋಗಿಲೆ ಕೊರಳಲಿ ಉಸಿರು ೩
ಹಣ್ಣಿನ ಮರದಲಿ ಎಲ್ಲಾ ಕಾಲಕು
ಬಯಸಿದ ಫಲಗಳು ದೊರೆತು
ನೆನೆದರೆ ಸಾಕು ಹೊಟ್ಟೆಯು ತುಂಬಿ
ಹಸಿವನು ಹಿಂಗಿಸಿ ಅರಿತು ೪
ಹರಿಯುವ ನದಿಗಳು ಹುಣ್ಣುಮೆ ದಿನಕೆ
ನಮ್ಮನೆ ಮುಂದೆ ಹರಿದು
ಕತ್ತಲೆ ತುಂಬಿದ ಅಮವಾಸೆಯಲಿ
ಪೌರ್ಣಿಮೆ ಬೆಳಕನು ಸುರಿದು ೫
ಬೆನ್ನನು ತಟ್ಟಿ ಗುರುಗಳ ಹರಕೆಗೆ
ವಿದ್ಯೆಯು ದೊರೆಯಲಿ ಮತ್ತೆ
ಸುಂದರ ಕತ್ತೆಯ ಮರಿಗಳು ಎಲ್ಲಾ
ಬೆಳೆದಂತೆಲ್ಲಾ ಕತ್ತೆ ೬
- Hಜೀವರಾಜ ಛತ್ರದ
30.07.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ