ಮಂಗಳವಾರ, ಜೂನ್ 1, 2010

ಬೆಳಗಿನ ಹನಿಗಳು



ಬೀಳಲಿಲ್ಲ ಕನಸುಗಳು

ನಿನ್ನ ಆಶಯದಂತೆ
ನನಗೆ ಕನಸುಗಳೇ

ಬೀಳಲಿಲ್ಲ;

ಏಕೆಂದರೆ ನಿನ್ನ ನೆನಪಲ್ಲಿ
ಇಡೀ ರಾತ್ರಿ ನಿದ್ದೆಯೇ ಬರಲಿಲ್ಲ.

******
ನಿರೀಕ್ಷೆ

ಕಾಯುತ್ತಿದ್ದೇನೆ
ನಾನು ನಿನಗಾಗಿ,
ನಿನ್ನ ಸಂದೇಶಕ್ಕಾಗಿ
ನಿನ್ನ ಒಲವಿನ ಸ್ಪರ್ಶಕ್ಕಾಗಿ
ಒಂದೇ ಒಂದು ಸಿಹಿ ಸಿಂಚನಕ್ಕಾಗಿ.

******

ಬೆಳಗೇ ಇಲ್ಲ

ಗೆಳತಿ,
ನಿನ್ನ ಸಂದೇಶವಿಲ್ಲದ
ನನಗೆ ಬೆಳಗೇ ಇಲ್ಲ,
ರಾತ್ಫ್ರಿಗೆ ಅರ್ಥವೇ ಇಲ್ಲ,
ನಿನ್ನ ಪ್ರೀತಿಯ
ಸಿಂಚನವಿಲ್ಲದೆ ನನಗೆ
ಬದುಕೇ ಇಲ್ಲ;
ಏಕೆಂದರೆ ನನಗೆ ನೀನೆ ಎಲ್ಲ.

* ರಾಜೇಂದ್ರ ಪಾಟೀಲ್
( ಉಮಾತನಯರಾಜ)
ಹುಬ್ಬಳ್ಳಿ
೦೨.೦೬.೨೦೧೦






ಕಾಮೆಂಟ್‌ಗಳಿಲ್ಲ:

ಸುಜಾತಾ ರವೀಶ್ ಗಝಲ್

     ಗಝಲ್    ಭವಸಾಗರ ದಾಟಲು ಮಾರ್ಗ     ತೋರುತಿರುವೆಯಾ ದಾಶರಥಿ    ನವಚೇತನ ತುಂಬಲು ದಾರಿ     ನೀನಾಗಿರುವೆಯಾ  ದಾಶರಥಿ    ದೇವಾಲಯದ ಮೂರ್ತಿಯಲ್ಲಿ ನಿನ್ನ ಅಸ್ತಿತ್ವ...